ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ.
ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)
ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದರೆ, ೮-೧೦ ಮೆಂತ್ಯದ ಕಾಳುಗಳನ್ನು ಮಜ್ಜಿಗೆಯಲ್ಲಿ ೧೫ ನಿಮಿಷ ನೆನೆಸಿ, ಕುಡಿದರೆ (ಮೆಂತ್ಯದ ಸಹಿತ) ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಇದೊಂದು ಹೊಸ ಅಂಕಣ (?) ದ ಪ್ರಯೋಗ. ಹೆಸರೇ ಹೇಳುವಂತೆ, ಮುಂದಿನ ಪೀಳಿಗೆಗಾಗಿ ಅಥವಾ ನಮ್ಮ ಮುಂದಿನ ದಿನಗಳಿಗಾಗಿ ನನ್ನ ಚಿಕ್ಕ ಸೇವೆ. ಎಂದಿನಂತೆ ತಪ್ಪಿದಲ್ಲಿ ತಿದ್ದಿ, ಪ್ರೋತ್ಸಾಹಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರಾ ಎಂದುಕೊಳ್ಳುತ್ತಾ ...
Water purifier ನಿಂದ ಬರುವ waste ನೀರನ್ನು ನಾವು ಗಿಡಗಳಿಗೆ ಹಾಕುತ್ತೇವೆ. ನೀವು?