ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)
Showing posts with label ಬಿಟ್ಟಿ ಸಲಹೆ. Show all posts
Showing posts with label ಬಿಟ್ಟಿ ಸಲಹೆ. Show all posts

July 29, 2013

ಬಿಟ್ಟಿ ಸಲಹೆ -- 4

ಸಿಂಕ್ ತೊಳೆಯಲು :
 
ಬಳಸಿದ ನಿಂಬೆ ಹೋಳನ್ನು ಸಿಂಕ್ ತೊಳೆಯಲು ಬಳಸಿದರೆ ಸಿಂಕಿನಲ್ಲಿರುವ ಜಿಡ್ಡೂ  ಹೋಗುತ್ತದೆ  ಸಿಂಕ್ ಪರಿಮಳಯುಕ್ತವೂ ಆಗುತ್ತದೆ. 

March 24, 2011

ಬಿಟ್ಟಿ ಸಲಹೆ -- 3

ಹೊಟ್ಟೆ ನೋವಿಗೆ:

ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದರೆ, ೮-೧೦ ಮೆಂತ್ಯದ ಕಾಳುಗಳನ್ನು ಮಜ್ಜಿಗೆಯಲ್ಲಿ ೧೫ ನಿಮಿಷ ನೆನೆಸಿ, ಕುಡಿದರೆ (ಮೆಂತ್ಯದ ಸಹಿತ) ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

January 12, 2011

ಬಿಟ್ಟಿ ಸಲಹೆ -- 2

ಹಿಮ್ಮಡಿ ಒಡೆಯುವಿಕೆಗೆ:

ಕಾಲಿನ ಹಿಮ್ಮಡಿ ಒಡೆದು ತೊಂದರೆಯಾಗುತ್ತಿದ್ದರೆ, ಹೂಬಿಸಿ ನೀರಿನಲ್ಲಿ ಕಾಲು ಇಳಿಬಿಟ್ಟು, ಸ್ವಲ್ಪ ಸಮಯದ ನಂತರ ಸ್ವಚ್ಛವಾಗಿ ತೊಳೆಯಿರಿ. ನಂತರ ಲೋಳೆಸರ (ಆಲೋವೆರ) ಎಲೆಯನ್ನು ಮಧ್ಯದಲ್ಲಿ ಕತ್ತರಿಸಿ, ಲೋಳೆಯನ್ನು ಒಡೆದ ಜಾಗಕ್ಕೆ ಹಚ್ಚಿ.೩-೪ ವಾರ ಹೀಗೆ  ಮಾಡಿದಲ್ಲಿ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತ ಬರುತ್ತದೆ.

December 22, 2010

ಬಿಟ್ಟಿ ಸಲಹೆ -- 1

[ ಹೌದು, ಹೆಸರೇ ಹೇಳುವಂತೆ ನನ್ನ ಕೆಲವು ಬಿಟ್ಟಿ ಸಲಹೆಗಳನ್ನು ಬರೆಯುತ್ತಿದ್ದೇನೆ. ಇಷ್ಟವಾದರೆ ನೀವೂ ಮಾಡಿ ನೋಡಿ.]

ಕೂದಲು ಉದುರುವಿಕೆಗೆ:

ತಲೆಕೂದಲು ತುಂಬಾ ಉದುರುತ್ತಿದೆಯಾದರೆ, 100 ml  ಬಾದಾಮಿ ಎಣ್ಣೆಗೆ, 100 ml  ಆಲಿವ್ ಎಣ್ಣೆ ಬೆರೆಸಿ, ಕೂದಲ ಬುಡಕ್ಕೆ ತಿಕ್ಕಿ ಮಸಾಜ್ ಮಾಡಿ, ಒಂದು ರಾತ್ರಿ ಬಿಟ್ಟು ಸ್ನಾನ ಮಾಡಿ. ಉದುರುವಿಕೆ ಕಡಿಮೆಯಾಗುತ್ತದೆ.