ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

July 29, 2013

ಬಿಟ್ಟಿ ಸಲಹೆ -- 4

ಸಿಂಕ್ ತೊಳೆಯಲು :
 
ಬಳಸಿದ ನಿಂಬೆ ಹೋಳನ್ನು ಸಿಂಕ್ ತೊಳೆಯಲು ಬಳಸಿದರೆ ಸಿಂಕಿನಲ್ಲಿರುವ ಜಿಡ್ಡೂ  ಹೋಗುತ್ತದೆ  ಸಿಂಕ್ ಪರಿಮಳಯುಕ್ತವೂ ಆಗುತ್ತದೆ. 

July 23, 2013

ಕನ್ನಡಪ್ರಭ ಜಗುಲಿಯಲ್ಲಿ ಪ್ರಕಟವಾದ ಚಿಕ್ಕ ಬರಹಗಳು

ಕನ್ನಡಪ್ರಭ ಜಗುಲಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಬರೆದ ಎರಡು ಉತ್ತರಗಳು ಆಯ್ಕೆಯಾಗಿದ್ದವು (ತುಂಬಾ ದಿನಗಳ ನಂತರ ಇಲ್ಲಿ ಹಾಕುತ್ತಿದ್ದೇನೆ )
 


 

July 19, 2013

ಪುಟ್ಟನ ಪ್ರಶ್ನೆ -- 8


ಪುಟ್ಟನಿಗೆ ಸ್ನಾನ ಮಾಡ್ಸೋವಾಗ ಹೇಳ್ದೆ, " ಈ ಶನಿವಾರ ನಿನ್ನನ್ನ ಡೆಂಟಿಸ್ಟ್ ಹತ್ರ ಕರ್ಕೊಂಡು ಹೋಗ್ಬೆಕು, ಒಟ್ಟೆ ಆಗಿದ್ಯಂತೆ, ಸಿಮೆಂಟ್ ತುಂಬಿಸ್ಬೇಕು" ಅಂತ. ಅದಕ್ಕೆ ಪುಟ್ಟಾ ಕೇಳ್ದಾ , " ಅಮ್ಮಾ, ನಾನೇನು ರೋಡಾ ಸಿಮೆಂಟ್ ತುಂಬಿಸೋಕೆ?" !!&%^$%!!
[ಅಂದ ಹಾಗೆ ಪುಟ್ಟಾ ಸ್ವಲ್ಪ ದಿನದ ಹಿಂದೆ ಸಿರಸಿಯಲ್ಲಿ ಸಿಮೆಂಟ್ ರೋಡ್ ಮಾಡೋದು ನೋಡಿದ್ದ]

July 18, 2013

"ಭಾವ ಲೀಲೆ"




ಮೊನ್ನೆ ಮೊನ್ನೆಯವರೆಗೂ
"ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ"
ಎಂದು ಹಾಡುತ್ತಿದ್ದ ಹುಡುಗಿ,
ನಿನ್ನೆ ಅಕ್ಕನ ಮದುವೆಯಾದಾಗಿನಿಂದ
"ಬನ್ನಿ ಭಾವನವರೇ ಬನ್ನಿ ನನ್ನೆಡೆಗೆ"
ಎಂದು ಹಾಡಲಾರಂಭಿಸಿದ್ದಾಳಲ್ಲಾ!!